ಮುಗಿಯಿತೆ ನಾಟಕವು

ಮುಗಿಯಿತೆ ನಾಟಕವು
ಪರದೆ ಕೆಳಕ್ಕಿಳಿಯಿತೆ
ಪ್ರೇಕ್ಷಕರೆದ್ದು ಹೋಗಿಯಾಯಿತೆ
ನೇಪಥ್ಯ ಬರಿದಾಯಿತೆ

ವೇಷ ಕಳಚಬೇಕು ನಟರು
ಮುಖವ ತೊಳೆಯಬೇಕು ಅವರು
ತೊಳೆದರೂನು ಬಣ್ಣವು
ಮೋರೆಯಲ್ಲಿ ಇನ್ನುವು

ಇನ್ನೂ ಏನೊ ಉಳಿದಂತೆ
ಕತೆಯಿನ್ನೂ ಮುಗಿಯದಂತೆ
ಮಾತು ಅರ್‍ಧವು
ಮಾತಿನರ್‍ಥ ಅರ್ಧವು

ಯಾವುದು ತಾನೆ ನಾಟಕ
ಯಾವುದು ತಾನೆ ಜೀವನ
ಯಾವುದರಲಿ ಯಾವುದೆಂದು
ತಿಳಿಯದಂತು ಗೊಂದಲ

ಕೊನೆಯಾದರೂ ಕೊನೆಯಿಲ್ಲ
ಅಂಕ ದೃಶ್ಯ ಮರೆತಿತಲ್ಲ
ಮನಸು ಆಗಲೇ
ರಂಗ ಮಧ್ಯದಲ್ಲೇ

ಬಣ್ಣ ಬದಲಾಯಿಸಿ
ವೇಷ ಬದಲಾಯಿಸಿ
ಸತ್ತವನೆದ್ದು ಬರಬಹುದೆ
ಮಿಂಚುವನೆ ಇಲ್ಲ ಕುಸಿಯುವನೆ

ಅಂಕ ಬದಲಾಗುವುದು
ನಾಟಕ ಬದಲಾಗುವುದು
ನೋಡುವ ಜನರು ಬದಲಾಗುವರು
ಬದಲಾಗದಿರುವರೇನು ಆಡುವವರೂ ಆಡಿಸುವವರೂ

ಇದ್ದರದಕೆ ದೃಶ್ಯವೆಂದು
ಇಲ್ಲದಿದ್ದರೆ ಅದೃಶ್ಯವೆಂದು
ನಟರ ನಟ ನಟರಾಜನೆ
ದಿಗ್ದರ್‍ಶಕ ನೀ ಸದಾಶಿವ ಸದಾ ಕಣ್ಮರೆ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೇವಿನ ಮರದ ಬಗೆಗೆ ನೀವೇನು ತಿಳಿದುಕೊಂಡಿದ್ದೀರಿ?
Next post ಸತ್ಯದ ಸಮೀಪ ಬಾ

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

cheap jordans|wholesale air max|wholesale jordans|wholesale jewelry|wholesale jerseys